Karnataka logo

Karnataka Tourism
GO UP

ಅಕ್ಟೋಬರ್ 2022

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಪ್ರಶಾಂತ ಮತ್ತು ಸುಂದರವಾದ ಗಿರಿಧಾಮಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ‘ಕರ್ನಾಟಕದ ಕಾಫಿ ನಾಡು’ ಎಂದೂ ಕರೆಯಲ್ಪಡುವ ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಪ್ರಸಿದ್ಧ ಪ್ರದೇಶಗಳಿವೆ. ಪ್ರಾಚೀನ ದೇವಾಲಯಗಳು, ಜಲಪಾತಗಳು, ಹಸಿರು ಕಾಫಿ ತೋಟಗಳು, ಚಾರಣ ಪ್ರದೇಶಗಳು ಅಭಯಾರಣ್ಯಗಳು, ವನ್ಯಜೀವಿ ಪ್ರದೇಶಗಳು ಸೇರಿದಂತೆ ಚಿಕ್ಕಮಗಳೂರು ಎಲ್ಲವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.

ನೀವು ತುಮಕೂರಿನಲ್ಲಿ ಎತ್ತರದ ಬೆಟ್ಟಗಳು, ಚಾರಣ ಪ್ರದೇಶಗಳು, ಭವ್ಯವಾದ ಕೋಟೆಗಳು ಮತ್ತು ಪ್ರಾಚೀನ ದೇವಾಲಯಗಳನ್ನು ನೋಡಬಹುದು. ಬೆಂಗಳೂರಿನಿಂದ ಇಲ್ಲಿಗೆ ವಾರಾಂತ್ಯದ ರಜೆಯನ್ನು ಕಳೆಯಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ. ತುಮಕೂರು ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು, ಯಾತ್ರಿಕರು, ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಸಾಕಷ್ಟು ಆಕರ್ಷಕ ಸ್ಥಳಗಳನ್ನು ಹೊಂದಿದೆ. ತುಮಕೂರು ನಗರವು ಪ್ರಮುಖ ಶಿಕ್ಷಣ ಕೇಂದ್ರವು ಹೌದು.