Karnataka logo

Karnataka Tourism
GO UP
Costal Karnataka

ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು

separator
  /  ಬ್ಲಾಗ್   /  ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು
ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು

ಕರಾವಳಿ ಕರ್ನಾಟಕದ ಪ್ರವಾಸಿ ಸ್ಥಳಗಳು

ಕರಾವಳಿ ಕರ್ನಾಟಕವು ಮರಳಿನ ಕಡಲತೀರಗಳು, ಹಚ್ಚ ಹಸಿರು ಪ್ರಕೃತಿ, ಉತ್ಸಾಹಭರಿತ ಸಂಸ್ಕೃತಿ, ಭವ್ಯವಾದ ದೇವಾಲಯಗಳು ಮತ್ತು ರುಚಿಕರವಾದ ತಿನಿಸುಗಳಿಗೆ ಹೆಸರುವಾಸಿ ಆಗಿದೆ. ದೈನಂದಿನ ಜೀವನದ ಜಂಜಾಟದಿಂದ ಹೊರಬರಲು ವಿಶ್ರಾಂತಿಗಾಗಿ ನೀವು ಪ್ರವಾಸಿ ಸ್ಥಳಗಳನ್ನು ಹುಡುಕಾಡುತ್ತಿದ್ದರೇ ಕರಾವಳಿ ಕರ್ನಾಟಕದ ಪಟ್ಟಣಗಳು ನಿಮಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ನಿಮ್ಮ ಮುಂದಿನ ಕರ್ನಾಟಕ ಪ್ರವಾಸದ ಸಮಯದಲ್ಲಿ ನೀವು ಭೇಟಿ ನೀಡಲೇಬೇಕಾದ ಅತ್ಯಂತ ಬೇಡಿಕೆಯ ತಾಣಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ.

ಗೋಕರಣ:

Cultural
ಗೋಕರ್ಣ ನಗರವು ಕರಾವಳಿ ಕರ್ನಾಟಕ ದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದ್ದು ಇದು ಪ್ರಕೃತಿ ಪ್ರಿಯರ ಸ್ವರ್ಗವಾಗಿದೆ. ಇದು ಸುಂದರವಾದ ಕಡಲ ತೀರವಿದ್ದು ಶಾಂತಿಯುತ ಪರಿಸರ ಮತ್ತು ಕಡಲತೀರಗಳಿಂದ ಆಶೀರ್ವದಿಸಲ್ಪಟ್ಟಿದೆ. ನೀವು ಇಲ್ಲಿ ವಿಶ್ರಾಂತಿ ರಜೆಯನ್ನು ಆನಂದಿಸಬಹುದು ಅಥವಾ ರೋಮಾಂಚಕ ಚಟುವಟಿಕೆಗಳನ್ನು ಆನಂದಿಸಬಹುದು. ನೀವು ಇಲ್ಲಿ ಪ್ಯಾರಾಸೈಲಿಂಗ್, ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಸರ್ಫಿಂಗ್ ನಂತಹ ರೋಮಾಂಚಕ ಜಲಕ್ರೀಡೆಗಳನ್ನು ಸಹ ಆನಂದಿಸಬಹುದು. ಕುಡ್ಲೆ ಬೀಚ್, ಓಂ ಬೀಚ್ ಮತ್ತು ಹಾಫ್ ಮೂನ್ ಬೀಚ್ ಇಲ್ಲಿನ ಜನಪ್ರಿಯ ಕಡಲತೀರಗಳಾಗಿವೆ. ಗೋಕರ್ಣವು ಒಂದು ಪವಿತ್ರ ಯಾತ್ರಾಸ್ಥಳವಾಗಿದ್ದು, ಇಲ್ಲಿ ಭವ್ಯವಾದ ಮಹಾಬಲೇಶ್ವರ ದೇವಾಲಯವಿದೆ.

ಮಂಗಳೂರು:

Cultural
ಮಂಗಳೂರು ನಗರವು ಶ್ರೀಮಂತ ಇತಿಹಾಸ, ಭವ್ಯವಾದ ದೇವಾಲಯಗಳು, ಆಕರ್ಷಣೀಯ ಕಡಲತೀರಗಳು ಮತ್ತು ಮಂಗಳೂರಿನ ವಿಶೇಷ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಮಂಗಳೂರು ಕರಾವಳಿ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಅತ್ಯುತ್ತಮ ತಾಣವಾಗಿದೆ. ಕುದ್ರೋಳಿ ಗೋಕರ್ಣನಾಥ ದೇವಾಲಯವು ಈ ಪ್ರದೇಶದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಮಂಗಳೂರು ರೋಮಾಂಚಕ ದಸರಾ ಆಚರಣೆಗೆ ಹೆಸರುವಾಸಿಯಾಗಿದೆ. ಇದರ ಜೊತೆಗೆ, ಸಮ್ಮಿಲನ್ ಶೆಟ್ಟಿಯವರ ಬಟರ್ಫ್ಲೈ ಪಾರ್ಕ್ ಮತ್ತು ಮಂಗಳಾದೇವಿ ದೇವಸ್ಥಾನವು ಇಲ್ಲಿನ ಇತರ ಪ್ರವಾಸಿ ಆಕರ್ಷಣೆಗಳಾಗಿವೆ.

ಉಡುಪಿ:

Mysuru
ಉಡುಪಿ ನೀವು ಭೇಟಿ ನೀಡಲೇಬೇಕಾದ ಮತ್ತೊಂದು ಕರಾವಳಿ ಕರ್ನಾಟಕದ ನಗರವಾಗಿದೆ. ಇದು ಕೆಲವು ಅಪ್ರತಿಮ ದೇವಾಲಯಗಳ ತವರೂರು ಆಗಿದೆ. ಉಡುಪಿ ಶ್ರೀಕೃಷ್ಣ ದೇವಸ್ಥಾನ, ಮೇಪಲ್ ಬೀಚ್, ಸೇಂಟ್ ಮೇರಿಸ್ ಬೀಚ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ ನಗರದ ಪ್ರಮುಖ ಆಕರ್ಷಣೆಗಳಾಗಿವೆ. ಹಾಗಾಗಿ, ನೀವು ಆಧ್ಯಾತ್ಮಿಕ ಅನ್ವೇಷಕರಾಗಲಿ ಅಥವಾ ನಿಸರ್ಗ ಪ್ರೇಮಿಯಾಗಲಿ, ಉಡುಪಿಯಲ್ಲಿ ನಿಮಗೆ ಬೇಕಾದ ಎಲ್ಲವೂ ಸಿಗುತ್ತದೆ. ನೀವು ಇಲ್ಲಿಗೆ ಭೇಟಿ ನೀಡುವುದನ್ನು ಮರೆಯಬೇಡಿ.

ಮುರುಡೇಶ್ವರ:

Mangalore
ಸುಂದರವಾದ ಕಡಲತೀರದ ಪಟ್ಟಣವಾದ ಮುರುಡೇಶ್ವರವು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಗೆ ನೆಲೆಯಾಗಿದೆ. ಮುರುಡೇಶ್ವರ ದೇವಾಲಯವು ರಾಜ್ಯದ ಅತ್ಯಂತ ಅಪ್ರತಿಮ ದೇವಾಲಯಗಳಲ್ಲಿ ಒಂದಾಗಿದೆ, ಈ ಕಡಲತೀರದ ನಗರವು ಪ್ರತಿ ವರ್ಷ ಸಾವಿರಾರು ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇದಲ್ಲದೆ, ಇಲ್ಲಿನ ಮಿರ್ಜಾನ್ ಕೋಟೆ, ಪ್ರತಿಮೆ ಪಾರ್ಕ್, ನೇತ್ರಾಣಿ ದ್ವೀಪ ಮತ್ತು ಮುರುಡೇಶ್ವರ ಬೀಚ್ ಗಳಿಗೆ ಸಹ ನೀವು ಭೇಟಿ ನೀಡಬಹುದು.

ಕಾರವಾರ:

Flag karnataka
ಈ ಕಡಲತೀರದ ನಗರವು ಪ್ರಕೃತಿ ಮತ್ತು ಶಾಂತಿ ಪ್ರಿಯರನ್ನು ಕೈಬೀಸಿ ಕರೆಯುವ ಸ್ವರ್ಗವಾಗಿದೆ. ಇಲ್ಲಿ, ನೀವು ಕಾಳಿ ನದಿಯಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು, ಕಾಳಿ ನದಿಯ ಉದ್ಯಾನದಲ್ಲಿ ಸ್ವಲ್ಪ ಸಮಯ ಕಳೆಯಬಹುದು, ರವೀಂದ್ರನಾಥ ಟ್ಯಾಗೋರ್ ಬೀಚ್ನಲ್ಲಿ ಸಮ್ಮೋಹನಗೊಳಿಸುವ ಸೂರ್ಯಾಸ್ತವನ್ನು ವೀಕ್ಷಿಸಬಹುದು ಮತ್ತು ನಾಗನಾಥ ದೇವಾಲಯದಲ್ಲಿ ಆಶೀರ್ವಾದ ಪಡೆಯಬಹುದು. ಕಾರವಾರದ ಅಧಿಕೃತ ಪಾಕಪದ್ಧತಿಯನ್ನು ಸಹ ಸವಿಯುವುದನ್ನು ಮರೆಯಬೇಡಿರಿ.

ಪ್ರಯಾಣಿಕರಿಗೆ ಕರಾವಳಿ ಕರ್ನಾಟಕವು ಸಾಕಷ್ಟು ಅದ್ಭುತ ಕೊಡುಗೆಗಳನ್ನು ನೀಡುತ್ತದೆ. ಆದ್ದರಿಂದ, ನೀವು ವಿಹಾರಕ್ಕೆ ಯೋಜಿಸುತ್ತಿದ್ದರೆ, ಈ ಮೇಲೆ ಹೇಳಲಾದ ನಗರಗಳಿಗೆ ತಪ್ಪದೇ ಭೇಟಿ ನೀಡಿ.