Karnataka logo

Karnataka Tourism
GO UP

ಡಿಸೆಂಬರ್ 2022

ಮತ್ತೆ ಕ್ರಿಸಮಸ್ ಬಂದಿದೆ! ಕ್ರಿಸಮಸ್ ಹಬ್ಬವೆಂದರೇ ಎಲ್ಲೆಲ್ಲಿಯೂ ಸಡಗರವೇ. ಬೀದಿಬೀದಿಗಳು ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಈ ಸಂದರ್ಭದಲ್ಲಿ ಇಡೀ ಜಗತ್ತೆ ರಜೆಯ ಮೂಡ್‌ನಲ್ಲಿದ್ದು ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಲು, ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಅಥವಾ ನಗರದ ಗಡಿಬಿಡಿಯಿಂದ ತಪ್ಪಿಸಿಕೊಳ್ಳಲು ಕಾಯುತ್ತಿರುತ್ತಾರೆ.

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ ಎಲ್ಲವನ್ನೂ ಹೊಂದಿದೆ.

ವಿರೂಪಾಕ್ಷ ದೇವಾಲಯ, ಅಪ್ರತಿಮವಾದ ಕಲ್ಲಿನ ರಥ ಮತ್ತು ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಗೆ ಹೆಸರುವಾಸಿಯಾಗಿರುವ ಐತಿಹಾಸಿಕ ನಗರ ಹಂಪಿಯಲ್ಲಿ ಪ್ರವಾಸಿಗರು ಹಲವಾರು ಸ್ಥಳಗಳನ್ನು ನೋಡಬಹುದು. ಹಂಪಿಯು ಪ್ರಾಯೋಗಿಕ ಮತ್ತು ನಿಧಾನಗತಿಯ ಪ್ರಯಾಣ ಮಾಡುತ್ತ ಸ್ಥಳ ವೀಕ್ಷಣೆಯಲ್ಲಿ ಮುಳುಗಿ ಹೋಗಬಹುದಾದ ಸ್ಥಳವಾಗಿದೆ. ಒರಟಾದ ಮತ್ತು ಭವ್ಯವಾದ ಬಂಡೆಯ ಭೂದೃಶ್ಯದಲ್ಲಿ ನೆಲೆಗೊಂಡಿರುವ ಈ ಪಟ್ಟಣ ಒಂದು ಕಾಲದಲ್ಲಿ ಪ್ರಬಲವಾದ ವಿಜಯನಗರ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಮತ್ತು ಪ್ರಶಾಂತ ಪಟ್ಟಣವಾದ ಗೋಕರ್ಣವು ಬೆನ್ನಿಗೆ ಬ್ಯಾಗ್‌ ಹೊತ್ತು ತಿರುಗುವ ಪ್ರಯಾಣಿಕರಿಗೆ ಸ್ವರ್ಗವಾಗಿತ್ತು. ಆದರೆ ಈಗ ಬದಲಾಗಿದೆ. ಸಮುದ್ರ ದಂಡೆಯಲ್ಲಿನ ಸ್ಥಳಾನ್ವೇಷಣೆಯಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಹೊಂದಿರುವ ಗೋಕರ್ಣ ಪಟ್ಟಣವು ಇನ್ನೂ ಆನೇಕ ವಿಷಯಗಳನ್ನು ಒಳಗೊಂಡಿದೆ.

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.

ಪಶ್ಚಿಮ ಘಟ್ಟಗಳ ಸುಂದರ ಮತ್ತು ಹಚ್ಚ ಹಸಿರಿನ ಕಣಿವೆಗಳಲ್ಲಿ ನೆಲೆಸಿರುವ ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದೆ ಮಲೆನಾಡು ಪ್ರದೇಶದ ಅಡಿಯಲ್ಲಿದೆ.ಸಕಲೇಶಪುರವು ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯಿರುವ ವಾರಾಂತ್ಯದ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ ನೋಡಲು ಹಲವು ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ನೀವು ಅತಿಸುಂದರ ಭೂದೃಶ್ಯಗಳು, ಕಾಫಿ ಮತ್ತು ಮಸಾಲೆ ತೋಟಗಳು, ಆಕರ್ಷಕವಾದ ಜಲಪಾತಗಳು, ಟ್ರೆಕ್ಕಿಂಗ್ ಹಾದಿಗಳು ಮತ್ತು ಕೆಲವು ಪ್ರಾಚೀನ