Karnataka logo

Karnataka Tourism
GO UP
Image Alt

ಚಿಕ್ಕಮಗಳೂರಿನಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳು

separator
  /  ಬ್ಲಾಗ್   /  ಚಿಕ್ಕಮಗಳೂರಿನಲ್ಲಿ ನೋಡಬೇಕಾದ ಪ್ರಮುಖ ಸ್ಥಳಗಳು
chikkamagaluru

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಪ್ರಶಾಂತ ಮತ್ತು ಸುಂದರವಾದ ಗಿರಿಧಾಮಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ‘ಕರ್ನಾಟಕದ ಕಾಫಿ ನಾಡು’ ಎಂದೂ ಕರೆಯಲ್ಪಡುವ ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಪ್ರಸಿದ್ಧ ಪ್ರದೇಶಗಳಿವೆ. ಪ್ರಾಚೀನ ದೇವಾಲಯಗಳು, ಜಲಪಾತಗಳು, ಹಸಿರು ಕಾಫಿ ತೋಟಗಳು, ಚಾರಣ ಪ್ರದೇಶಗಳು ಅಭಯಾರಣ್ಯಗಳು, ವನ್ಯಜೀವಿ ಪ್ರದೇಶಗಳು ಸೇರಿದಂತೆ ಚಿಕ್ಕಮಗಳೂರು ಎಲ್ಲವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.
ಬಾಬಾ ಬುಡನ್ ಎಂಬ ಮುಸ್ಲಿಂ ಸಂತರು 1670 ರಲ್ಲಿ ಯೆಮನ್‌ನಿಂದ ಕಾಫಿ ಬೀಜಗಳನ್ನು ತಂದು ಇಲ್ಲಿ ಬೆಳೆಸಿದರು ಎಂದು ನಂಬಲಾಗಿದೆ. ಕಾಫಿ ಇಷ್ಟು ಜನಪ್ರಿಯತೆಯನ್ನು ಹೊಂದಲು ಬ್ರಿಟಿಷರ ಪ್ರಚಾರವು ಕಾರಣವಾಗಿದೆ. ಕಾಫಿ ಈಗ ಭಾರತೀಯರ, ವಿಶೇಷವಾಗಿ ದಕ್ಷಿಣ ಭಾರತೀಯರ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಲ್ಲ.

ಚಿಕ್ಕಮಗಳೂರಿನಲ್ಲಿ ನೋಡಲೇಬೇಕಾದ ಸ್ಥಳಗಳು

ಕುದುರೆಮುಖ

ಚಿಕ್ಕಮಗಳೂರು ಮೂಲತಃ ತನ್ನ ಮನಸೂರೆಗೊಳ್ಳುವ ಅದ್ಭುತ ಪ್ರಕೃತಿ ನೋಟಗಳು, ಮಂಜಿನ ಬೆಟ್ಟಗಳು, ಜಲಪಾತಗಳು ಮತ್ತು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ಇಲ್ಲಿನ ಪರಂಪರೆ, ದೇವಾಲಯಗಳು, ವನ್ಯಜೀವಿಗಳು ಮತ್ತು ಇತರ ಅನೇಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿಕ್ಕಮಗಳೂರಿನ ಪಾರಂಪರಿಕ ದೇವಾಲಯಗಳು

ಶ್ರೀ ವಿದ್ಯಾಶಂಕರ ದೇವಸ್ಥಾನ

ಹಾಸನ ಹತ್ತಿರವಿರುವ ಚಿಕ್ಕಮಗಳೂರು ಒಮ್ಮೆಯಾದರೂ ಭೇಟಿ ನೀಡಲು ಯೋಗ್ಯವಾದ ಅನೇಕ ಪರಂಪರೆಯ ದೇವಾಲಯಗಳಿಗೆ ನೆಲೆಯಾಗಿದೆ. ಬೆಳವಾಡಿ ಮತ್ತು ಅನಗಡಿಗಳು ಅಂತಹ ಎರಡು ಪ್ರಸಿದ್ಧ ದೇವಾಲಯಗಳು. ಈ ದೇವಾಲಯಗಳು ತಮ್ಮ ಸೊಗಸಾದ ಕುಶಲತೆ ಮತ್ತು ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾಗಿವೆ. ಕೇವಲ 30 ಕಿ.ಮೀ ದೂರದಲ್ಲಿರುವ ಬೆಳವಡಿಯು ಹೊಯ್ಸಳರಿಂದ ನಿರ್ಮಿಸಲ್ಪಟ್ಟ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ತ್ರಿಕೂಟಾಚಲ (ಮೂರು ದೇವಾಲಯಗಳು) ಹೊಂದಿದೆ. ಅನಗಡಿಯು ಆರು ದೇವಾಲಯಗಳ ಸಮೂಹವಾಗಿದ್ದು ಹೊಯ್ಸಳ ಅರಸರ ಆಳ್ವಿಕೆಯಲ್ಲಿತ್ತು. ಚಿಕ್ಕಮಗಳೂರಿನ ಇತರ ಪ್ರಸಿದ್ಧ ದೇವಾಲಯಗಳೆಂದರೆ ಬೋಳ ರಾಮೇಶ್ವರ, ಕೊಲ್ಲಾಪುರ ಮಹಾಲಕ್ಷ್ಮಿ, ಕನ್ನಿಕಾ ಪರಮೇಶ್ವರಿ, ರುಖ್ಮಾಯಿ ಪಾಂಡುರಂಗ, ಕಟ್ಟಿಮಾರಮ್ಮ ಅಮೃತಾಪುರ, ಹಿರೇಮಗಳೂರು, ಇಮಾಮ್ ದತ್ತಾತ್ರೇಯ ಪೀಠ, ಆಸಂದಿ, ಬಾಳೆಹೊನ್ನೂರು, ಬ್ರಹ್ಮಸಮುದ್ರ, ದೇವನೂರು, ಹರಿಹರಪುರ, ಜಯಪುರ, ಕಲಸಾಪುರ, ಕಲಸಾಪುರ, ಕಲಸಾಪುರ, ಕಲಸಾಪುರ, ಕಲಸಾಪುರ, , ದೇವರಮನೆ, ವಿದ್ಯಾರಣ್ಯಪುರ, ಯಲ್ಲಂಬಳಸೆ

ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್

ಬಲ್ಲಾಳರಾಯನದುರ್ಗ ಬೆಟ್ಟ ಚಿಕ್ಕಮಗಳೂರು

ಚಿಕ್ಕಮಗಳೂರು ಚಾರಣಪ್ರಿಯರಿಗೆ ಸ್ವರ್ಗವೇ ಸರಿ. ಇಲ್ಲಿನ ಹಚ್ಚ ಹಸಿರಿನ ಭೂದೃಶ್ಯಗಳು, ಪೊದೆಗಳಿಂದ ಕೂಡಿದ ಹಾದಿಗಳು ಮತ್ತು ಮಂಜಿನ ಬೆಟ್ಟಗಳು ಟ್ರೆಕ್ಕಿಂಗ್‍ನ ಸುಂದರ ಅನುಭವವನ್ನು ನೀಡುತ್ತವೆ. ನೀವು ಚಾರಣಿಗರಲ್ಲದಿದ್ದರೂ ಸಹ ಮತ್ತು ನಿಸರ್ಗ ಪ್ರೇಮಿಯಾಗಿದ್ದರೂ ಅಥವಾ ಛಾಯಾಗ್ರಹಣ ಉತ್ಸಾಹಿಯಾಗಿದ್ದರೂ ಸಹ, ಚಿಕ್ಕಮಗಳೂರು ನಿಮಗೆ ಸರಿಯಾದ ಸೂಕ್ತ ತಾಣವಾಗಿದೆ. ವೃತ್ತಿಪರ ಟೂರ್ ಆಪರೇಟರ್‌ಗಳು ಆಯೋಜಿಸಿರುವ ಟ್ರೆಕ್ಕಿಂಗ್‌ ನಲ್ಲಿ ಮಾತ್ರ ಭಾಗವಹಿಸಿ. ನೀವೇ ನಿಮ್ಮ ಸ್ವಂತ ಸಾಹಸವನ್ನು ಮಾಡಲು ಹೋಗಬೇಡಿ. ಮಾನ್ಸೂನ್ ಮತ್ತು ಮಾನ್ಸೂನ್ ನಂತರದ ಹವಾಮಾನವು ಚಿಕ್ಕಮಗಳೂರಿಗೆ ಭೇಟಿ ನೀಡಲು ಉತ್ತಮವಾದ ಋತುವಾಗಿದೆ. ಈ ಸಮಯವು ತಂಪಾದ ಮತ್ತು ಮಂಜಿನ ಮುಂಜಾನೆಯ, ದೃಶ್ಯವೀಕ್ಷಣೆಗೆ ಸೂಕ್ತವಾಗಿದೆ. ಮುಳ್ಳಯ್ಯನಗಿರಿ ,ಕೆಮ್ಮನಗುಂಡಿ ಮತ್ತು ಬಲ್ಲಾಳರಾಯನ ದುರ್ಗ ಚಿಕ್ಕಮಗಳೂರಿನ ಪ್ರಸಿದ್ಧ ಸ್ಥಳಗಳಾಗಿವೆ. ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿದ್ದು ವರ್ಷವಿಡೀ ತಣ್ಣನೆಯ ಗಾಳಿಯೊಂದಿಗೆ ಹೆಚ್ಚಾಗಿ ಮಂಜಿನಿಂದ ಕೂಡಿರುತ್ತದೆ.

ಸಲಹೆ: ಇಲ್ಲಿನ ಹೆಚ್ಚಿನ ಸ್ಥಳಗಳಲ್ಲಿ ಕ್ಯಾಂಪಿಂಗ್ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಇಲ್ಲ. ದಯವಿಟ್ಟು ಸೂರ್ಯಾಸ್ತದ ಮೊದಲು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಿ ಅಥವಾ ಟೂರ್ ಆಪರೇಟರ್/ಟ್ರೆಕ್ ಕಂಪನಿಗಳೊಂದಿಗೆ ಇದರ ಕುರಿತು ಪರಿಶೀಲಿಸಿ. ಅವರು ರಾತ್ರಿಯ ತಂಗಲು ವ್ಯವಸ್ಥೆ ಮಾಡಬಹುದು.

ಜಲಪಾತಗಳು

ಜಲಪಾತಗಳು

ಕಾಫಿ ಮತ್ತು ಬೆಟ್ಟಗಳ ನಾಡಾದ ಚಿಕ್ಕಮಗಳೂರು ಅದ್ಭುತ ಜಲಪಾತಗಳನ್ನು ಹೊಂದಿದೆ. ಈ ಜಲಪಾತಗಳಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರದ ಸಮಯ. ಧುಮ್ಮಿಕ್ಕುವ ನೀರು ಮತ್ತು ಜಲಪಾತಗಳ ಘರ್ಜನೆಯ ಶಬ್ದವು ಪ್ರತಿಯೊಬ್ಬ ಪ್ರವಾಸಿಗನು ಇಲ್ಲಿ ತಮ್ಮ ಮೊಬೈಲ್ ಮೂಲಕ ಹಲವಾರು ಚಿತ್ರಗಳನ್ನು ಕ್ಲಿಕ್ಕಿಸಲು ಪ್ರಚೋದಿಸುತ್ತದೆ.

ಇಲ್ಲಿ ಇರುವ ಕೆಲವು ಜನಪ್ರಿಯ ಜಲಪಾತಗಳೆಂದರೆ ಮಾಣಿಕ್ಯಧಾರಾ ಜಲಪಾತ, ಸಿರಿಮನೆ ಜಲಪಾತ, ಜಾರಿ ಜಲಪಾತ, ಕಲ್ಹಟ್ಟಿ ಜಲಪಾತ, ಹೆಬ್ಬೆ ಜಲಪಾತ, ಹೆಗ್ಗಡೆ ಜಲಪಾತ, ಬಂಡಜ್ಜೆ ಅರಬಿ ಜಲಪಾತ, ಮತ್ತು ಇನ್ನೂ ಹಲವು.

ಪ್ರಕೃತಿ ಮತ್ತು ವನ್ಯಜೀವಿ

ಭದ್ರಾ ವನ್ಯಜೀವಿ ಅಭಯಾರಣ್ಯ

ಚಿಕ್ಕಮಗಳೂರು ಜಿಲ್ಲೆಯು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ಹೆಸರುವಾಸಿ ಆಗಿದೆ. ಕೇವಲ 78 ಕಿಮೀ ದೂರದಲ್ಲಿರುವ ಭದ್ರಾ ವನ್ಯಜೀವಿ ಅಭಯಾರಣ್ಯವು ಪ್ರಾಣಿಗಳು , ಸಸ್ಯಗಳು ಮತ್ತು 250 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ಹೆಸರುವಾಸಿಯಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಸ್ವರ್ಗವಾಗಿದೆ. ಮುತ್ತೋಡಿ ಗೇಮ್ ಅಭಯಾರಣ್ಯವನ್ನು ಮೂಲತಃ ಜಾಗರ ವ್ಯಾಲಿ ಗೇಮ್ ರಿಸರ್ವ್ ಎಂದು 1952 ರಲ್ಲಿ ಗೊತ್ತುಪಡಿಸಲಾಗಿತ್ತು. ಮತ್ತು ಇದು ಸಫಾರಿ ಪ್ರಿಯರಲ್ಲಿ ಜನಪ್ರಿಯವಾಗಿದೆ.

ಚಿಕ್ಕಮಗಳೂರಿನಲ್ಲಿ ಸಾಹಸ ಮತ್ತು ಇತರ ಚಟುವಟಿಕೆಗಳು

ನೀಲಕುರಿಂಜಿ ಹೂಗಳುಚಿತ್ರ ಕ್ರೆಡಿಟ್‌ಗಳು:ಅಭೀಷ್ಟ ಕೆ.ಎಸ್

ಚಿಕ್ಕಮಗಳೂರಿನ ಪ್ರಶಾಂತತೆಯು ಎಲ್ಲ ಪ್ರಕೃತಿ ಪ್ರಿಯರನ್ನು, ಪಕ್ಷಿ ವೀಕ್ಷಕರನ್ನು, ಛಾಯಾಗ್ರಹಣ ಉತ್ಸಾಹಿಗಳನ್ನು ಮತ್ತು ಸಾಹಸ ಪ್ರಿಯರನ್ನು ಆಕರ್ಷಿಸುತ್ತದೆ. ಕುದುರೆಮುಖವು 200 ಕ್ಕೂ ಹೆಚ್ಚು ವಲಸೆ ಮತ್ತು ನಿವಾಸಿ ಪಕ್ಷಿಗಳಿಗೆ ನೆಲೆಯಾಗಿದೆ. ಇದು ಪಕ್ಷಿ ವೀಕ್ಷಕರ ಸ್ವರ್ಗವಾಗಿದೆ. ನೀವು ಇಲ್ಲಿನ ಸ್ಥಳೀಯ ಜೀವನಶೈಲಿಯ ಅನುಭವವನ್ನು ಹೊಂದಲು ಬಯಸುವಿರಾದರೆ ಕೆಲವು ಖಾಸಗಿ ಟೂರ್ ಆಪರೇಟರರನ್ನು ಸಂಪರ್ಕಿಸಿ. ಅವರು ಕಾಫಿ ತೋಟಗಳಲ್ಲಿ ಕ್ಯಾಂಪಿಂಗ್ ಮತ್ತು ಪ್ರಕೃತಿ ನಡಿಗೆಗಳನ್ನು(ನೇಚರ್ ವಾಕ್) ಆಯೋಜಿಸುತ್ತಾರೆ. ಈ ಪಶ್ಚಿಮ ಘಟ್ಟಗಳ ಪ್ರಮುಖ ಆಕರ್ಷಣೆ ಎಂದರೆ ನೀಲಕುರಿಂಜಿ ಹೂವುಗಳು. 12 ವರ್ಷಗಳಿಗೊಮ್ಮೆ ಮಾತ್ರ ಅರಳುವ ಈ ಲ್ಯಾವೆಂಡರ್-ನೀಲಿ ಹೂವುಗಳು ಇಲ್ಲಿನ ಬೆಟ್ಟಗಳ ಮೇಲೆ ಅದ್ಭುತವಾದ ಪ್ರಕೃತಿ ದೃಶ್ಯವನ್ನು ನಿರ್ಮಿಸುತ್ತವೆ. ಪ್ರವಾಸಿಗರು ಈ ಅದ್ಭುತವಾದ ಪ್ರಕೃತಿ ದೃಶ್ಯಗಳನ್ನು ನೋಡಲೇಬೇಕು.

ಇಲ್ಲಿಗೆ ತಲುಪುವುದು ಹೇಗೆ?

ವಿಮಾನದ ಮೂಲಕ

ಚಿಕ್ಕಮಗಳೂರಿಗೆ ವಿಮಾನದ ಮೂಲಕ ತಲುಪಲು ನೀವು ಮಂಗಳೂರು ಅಥವಾ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಬಹುದು. ಚಿಕ್ಕಮಗಳೂರಿನಿಂದ ಮಂಗಳೂರು ಸುಮಾರು 150 ಕಿಮೀ ಮತ್ತು ಬೆಂಗಳೂರು ಸುಮಾರು 280 ಕಿಮೀ ದೂರದಲ್ಲಿದೆ.

ರೈಲ್ವೆ ಮೂಲಕ

ಚಿಕ್ಕಮಗಳೂರು ಕಡೂರು ಜಂಕ್ಷನ್ ಮೂಲಕ ಸಂಪರ್ಕ ಹೊಂದಿದೆ. ಇದು ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ ಮತ್ತು ಈ ವಲಯದಲ್ಲಿ ಸಾಕಷ್ಟು ರೈಲು ಸೌಲಭ್ಯಗಳಿವೆ. ಪರ್ಯಾಯವಾಗಿ, ಮಂಗಳೂರಿನಿಂದ ರೈಲು ಹತ್ತಬಹುದು.

ರಸ್ತೆ ಸಾರಿಗೆ ಮೂಲಕ

ಚಿಕ್ಕಮಗಳೂರನ್ನು ತಲುಪಲು ರಸ್ತೆ ಸಾರಿಗೆಯು ಅತ್ಯುತ್ತಮವಾದ ಆಯ್ಕೆ ಆಗಿದೆ. ಇದು ಬಹುತೇಕ ಎಲ್ಲ ನಗರಗಳಿಂದ ಉತ್ತಮ ಸರ್ಕಾರಿ ಬಸ್‍ಗಳ ಹಾಗೂ ಖಾಸಗಿ ಬಸ್‍ಗಳ ಸೌಲಭ್ಯವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ಸ್ಥಳೀಯವಾಗಿ ಪ್ರಯಾಣಿಸಲು ಮತ್ತು ಬೆಟ್ಟಗಳು ಅಥವಾ ಜಲಪಾತಗಳನ್ನು ತಲುಪಲು ಸ್ಥಳೀಯವಾಗಿ ಕ್ಯಾಬ್ ಬಾಡಿಗೆಗೆ ಪಡೆಯಬಹುದು.