Karnataka logo

Karnataka Tourism
GO UP

ಬ್ಲಾಗ್

‘ಒಂದು ರಾಜ್ಯ ಹಲವು ಪ್ರಪಂಚಗಳು’, ಕರ್ನಾಟಕ ಪ್ರವಾಸೋದ್ಯಮದ ಟ್ಯಾಗ್ ಲೈನ್ ಎಲ್ಲವನ್ನೂ ಹೇಳುತ್ತದೆ. ಕರ್ನಾಟಕದ ಇತರ ಪ್ರವಾಸಿ ಆಕರ್ಷಣೆಗಳಂತೆ, ಜಲ ಕ್ರೀಡೆಗಳು ಮತ್ತು ಸಾಹಸವು ಸಹ ಎಲ್ಲಾ ವಯೋಮಾನದವರಿಂದ ಹೆಚ್ಚು ಬೇಡಿಕೆಯಿರುವ ಚಟುವಟಿಕೆಯಾಗಿದೆ. 300 ಕಿಮೀ ಕರಾವಳಿ, ನದಿಗಳು ಮತ್ತು ಹಿನ್ನೀರಿನ ಪ್ರದೇಶವನ್ನು ಹೊಂದಿರುವ ಕರ್ನಾಟಕವು ಜಲಕ್ರೀಡೆ ಚಟುವಟಿಕೆಗಳಿಗೆ ಸುಸಜ್ಜಿತವಾದ ರಾಜ್ಯವಾಗಿದೆ.

ಮೈಸೂರು ನಗರವು ತನ್ನ ಪರಂಪರೆ, ಸಂಸ್ಕೃತಿ, ದೇವಾಲಯಗಳು ಮತ್ತು ವೈಭವಕ್ಕಾಗಿ ಪ್ರಸಿದ್ಧವಾಗಿದ್ದು ಕರ್ನಾಟಕದಲ್ಲಿ ಹೆಚ್ಚು ಜನರು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ. ಮೈಸೂರು ನಗರವು ದೇವಾಲಯಗಳು ಮತ್ತು ಇತರ ಪ್ರಸಿದ್ಧ ಸ್ಥಳಗಳನ್ನು ಹೊಂದಿದ್ದು ಇದು ಹಲವು ವರ್ಷಗಳಿಂದ ಟಿಪ್ಪು ಸುಲ್ತಾನನ ತವರು ಸಹ ಆಗಿತ್ತು

ಕಡಲತೀರಗಳು ಮತ್ತು ಕರಾವಳಿ ಆಹಾರಕ್ಕಾಗಿ ಜನಪ್ರಿಯವಾಗಿ ಹೆಸರುವಾಸಿಯಾದ ಮಂಗಳೂರು ಅನೇಕ ಪಾರಂಪರಿಕ ದೇವಾಲಯಗಳಿಗೆ ನೆಲೆಯಾಗಿದೆ. ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿಗೆ ಹಿಂದೂ ದೇವತೆ ಮಂಗಳಾದೇವಿಯ ಹೆಸರನ್ನು ಇಡಲಾಗಿದೆ.

ಭಾರತವು ತನ್ನ ವಿಭಿನ್ನ ಪಾಕಶಾಲೆಯ ಕಲೆಗಳಿಗೆ ಹೆಸರುವಾಸಿಯಾಗಿದೆ, ಇದು ಆಧುನಿಕ ಅಡುಗೆ ಅಥವಾ ಸಾಂಪ್ರದಾಯಿಕ ಪಾಕವಿಧಾನಗಳಾಗಿರಬಹುದು. ನೀವು ಭಾರತದಲ್ಲಿ ಪ್ರತಿ 100 ಕಿ.ಮೀ.ಗೆ ರುಚಿ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುವ ವಿಧಾನದಲ್ಲಿ ಬದಲಾವಣೆಯನ್ನು ಕಾಣಬಹುದು.

ಕರ್ನಾಟಕವು ಅತ್ಯುತ್ತಮ ಭೂದೃಶ್ಯಗಳು ಮತ್ತು ತೀರಗಳಿಂದ ಆಶೀರ್ವದಿಸಲ್ಪಟ್ಟಿದ್ದು ಇದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸೈಕಲ್ ಟೂರ್‌ಗಳು ಅತ್ಯಂತ ಜನಪ್ರಿಯವಾಗುತ್ತಿವೆ. ಈ ಸೈಕಲ್ ಪ್ರವಾಸಗಳು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ .

ಈಗಾಗಲೇ ಮಕ್ಕಳ ಬೇಸಿಗೆಯ ರಜೆಗಳು ಆರಂಭವಾಗಿದೆ. ಬಹಳಷ್ಟು ಪೋಷಕರು ಈಗಾಗಲೇ ರಜೆಯ ದಿನಗಳನ್ನು ಯೋಜಿಸಲು ಆರಂಭಿಸಿದ್ದಾರೆ. ನಿಮಗೆ ಕರ್ನಾಟಕದಲ್ಲಿ ಬೇಸಿಗೆಯ ಸಮಯದಲ್ಲಿ ವೀಕ್ಷಿಸಲು ಸಾಕಷ್ಟು ಸ್ಥಳಗಳಿವೆ. ನೀವು ಬೇಸಿಗೆಯ ಸಮಯದಲ್ಲಿ ಮೈಸೂರು, ಬೆಂಗಳೂರು,ಕೂರ್ಗ ಸೇರಿದಂತೆ ಹಲವು ಜನಪ್ರಿಯ ತಾಣಗಳಿಗೆ ಭೇಟಿ ನೀಡಬಹುದು. ನೀವು ಕಡಲ ತೀರಗಳನ್ನು ಪ್ರೀತಿಸುತ್ತಿದ್ದರೇ ಗೋಕರ್ಣಕ್ಕೆ ಭೇಟಿ ನೀಡಬಹುದು.

ಕೇವಲ ಹುಡುಗರೇಕೆ ಪ್ರವಾಸದ ವಿನೋದವನ್ನು ಅನುಭವಿಸಬೇಕು. ಮಹಿಳೆಯರೇನು ಯಾರಿಗೇನು ಕಮ್ಮಿ ಇಲ್ಲ. ಈಗ ಸಾಕಷ್ಟು ಮಹಿಳೆಯರು ಒಬ್ಬಂಟಿಯಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನೀವು ಕೂಡ ಪ್ರವಾಸ ಕೈಗೊಳ್ಳಿ. ಮತ್ತು ಅಪರಿಮಿತ ಆನಂದವನ್ನು ಅನುಭವಿಸಿ.

ನಮ್ಮ ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಪ್ರಪಂಚದಾದ್ಯಂತದ ಪ್ರವಾಸಿಗರು, ಪ್ರಯಾಣಿಕರು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತದೆ ಅಂತೆಯೇ ನಮ್ಮ ಕರ್ನಾಟಕದ ಕಾಡುಗಳು, ವನ್ಯಜೀವಿಗಳು, ಪಕ್ಷಿಗಳು ಮತ್ತು ನೈಸರ್ಗಿಕ ಆವಾಸಸ್ಥಾನವು ಎಲ್ಲಾ ರೀತಿಯ ಪ್ರಯಾಣಿಕರನ್ನು ಆಕರ್ಷಿಸುತ್ತವೆ.

‘ಒಂದು ರಾಜ್ಯ ಹಲವು ಪ್ರಪಂಚಗಳು’ ಎಂಬಂತೆ. ಈ ಅರಣ್ಯ ಪ್ರಪಂಚವು ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ವಿಷಯವಾಗಿದೆ. ಪ್ರವಾಸಿಗರು, ಛಾಯಾಗ್ರಾಹಕರು, ಪ್ರಕೃತಿ ಮತ್ತು ವನ್ಯಜೀವಿ ಪ್ರೇಮಿಗಳು ಅರಣ್ಯದ ಅಚ್ಚ ಹಸಿರಿನಲ್ಲಿ ತಿರುಗಾಡುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ. ಕರ್ನಾಟಕವು ಹಲವಾರು ವನ್ಯಜೀವಿ ಮತ್ತು ಪಕ್ಷಿಧಾಮಗಳಿಗೆ ನೆಲೆಯಾಗಿದ್ದು ಜಂಗಲ್ ಸಫಾರಿಯು ಪ್ರತಿಯೊಬ್ಬ ಪ್ರಯಾಣಿಕರು ಹಂಬಲಿಸುವ ವಿಷಯವಾಗಿದೆ.

ಭಾರತದಲ್ಲಿ ಶಿವ ದೇವರನ್ನು ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗುತ್ತದೆ .ಭಾರತದಲ್ಲಿ ಸಾವಿರಾರು ದೊಡ್ಡ ಮತ್ತು ಚಿಕ್ಕ ಶಿವ ದೇವಾಲಯಗಳಿವೆ, ಅವುಗಳಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾಗಿವೆ.