Karnataka logo

Karnataka Tourism
GO UP

ಜಲಸಂಗಿ

separator
ಕೆಳಗೆ ಸ್ಕ್ರಾಲ್ ಮಾಡಿ

ಜಲಸಂಗಿ: ಜಲಸಂಗ್ವಿ ಬೀದರ ಜಿಲ್ಲೆಯ ಹುಮ್ನಾಬಾದ್ ಬಳಿಯ ಪುರಾತನ ಗ್ರಾಮ. ಜಲಸಂಗ್ವಿ ವಿರಾಟ ರಾಜನ ರಾಜಧಾನಿಯಾಗಿತ್ತು ಮತ್ತು ಪಾಂಡವ ಸಹೋದರರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಸಮಯ ಕಳೆದರು ಎಂದು ನಂಬಲಾಗಿದೆ.

ಕಲ್ಯಾಣ ಚಾಲುಕ್ಯ ದೇವಸ್ಥಾನ: ಜಲಸಂಗ್ವಿಯ ಪುಷ್ಕರಿಣಿಯ ದಡದಲ್ಲಿ, ಈಶ್ವರನನ್ನು ಮುಖ್ಯ ದೇವರಾಗಿ ಹೊಂದಿರುವ ಕಲ್ಯಾಣ ಚಾಲುಕ್ಯ ದೇವಾಲಯವು ಇದೆ ಮತ್ತು ಇದು ಭಗ್ನವಾಗಿದೆ. ಪ್ರಮುಖ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ ಸಮಯದಲ್ಲಿ ಜಲಸಂಗ್ವಿಯ ಕಲ್ಯಾಣ ಚಾಲುಕ್ಯ ದೇವಾಲಯವನ್ನು ನಿರ್ಮಿಸಲಾಯಿತು. ಜಲಸಂಗ್ವಿಯ ಕಲ್ಯಾಣ ಚಾಲುಕ್ಯ ದೇವಾಲಯದ ಹೊರ ಗೋಡೆಗಳು ಸುಂದರವಾದ ಶಿಲ್ಪಗಳನ್ನು ಒಳಗೊಂಡಿವೆ, ಇದರಲ್ಲಿ ಹಲವಾರು ನೃತ್ಯ ಭಂಗಿಗಳಲ್ಲಿ ‘ಶಿಲಾಬಾಲಿಕೆಯರ’ (ಸ್ತ್ರೀ ನರ್ತಕಿಯರ ಕೆತ್ತನೆಗಳು) ಹಲವಾರು ನಿರೂಪಣೆಗಳಿವೆ, ಇವು ವಿವಿಧ ಆಭರಣಗಳಿಂದ ಕೂಡಿವೆ. ಚಕ್ರವರ್ತಿ ವಿಕ್ರಮಾದಿತ್ಯನನ್ನು ವಿವರಿಸುವ ಕನ್ನಡ ಅಕ್ಷರಗಳಲ್ಲಿ ಸಂಸ್ಕೃತ ಶಿಲಾಶಾಸನವನ್ನು ಕೆತ್ತಿದಂತೆ ಚಿತ್ರಿಸಿದ ಶಿಲಾಬಾಲಿಕೆಯ ಶಿಲ್ಪ ಇಲ್ಲಿ ಕಾಣಸಿಗುತ್ತದೆ. ಜಲಸಂಗ್ವಿಯ ಶಿಲ್ಪಗಳು ಬೇಲೂರು ಮತ್ತು ಹಳೇಬೀಡು ದೇವಾಲಯಗಳಲ್ಲಿನ ಶಿಲ್ಪಕಲೆಗಳಿಗೆ ಪ್ರೇರಣೆ ನೀಡಿವೆ ಎಂದು ನಂಬಲಾಗಿದೆ.

ಹತ್ತಿರದ ಸ್ಥಳಗಳು:ಜಲಸಂಗ್ವಿ ಜೊತೆಗೆ ಭೇಟಿ ನೀಡಲು ಯೋಗ್ಯವಾದ ಮತ್ತು ಹತ್ತಿರವಾದ ಇತರ ಸ್ಥಳಗಳು ಹೀಗಿವೆ: ಬಸವಕಲ್ಯಾಣ (34 ಕಿ.ಮೀ), ಹುಮ್ನಾಬಾದ್ ನ ವೀರಭದ್ರೇಶ್ವರ ದೇವಸ್ಥಾನ (12 ಕಿ.ಮೀ), ಬೀದರ್ ಕೋಟೆ (46 ಕಿ.ಮೀ).

ತಲುಪುವುದು ಹೇಗೆ: ಜಲಸಂಗಿ ಬೆಂಗಳೂರಿನಿಂದ 700 ಕಿ.ಮೀ ಮತ್ತು ಜಿಲ್ಲಾ ರಾಜಧಾನಿ ಬೀದರದಿಂದ 45 ಕಿ.ಮೀ ದೂರದಲ್ಲಿದೆ. ಬೀದರ ಹತ್ತಿರದ ವಿಮಾನ ನಿಲ್ದಾಣವಾಗಿದೆ (42 ಕಿ.ಮೀ ದೂರದಲ್ಲಿದೆ). ಹುಮ್ನಾಬಾದ್ ಹತ್ತಿರದ ರೈಲು ನಿಲ್ದಾಣವಾಗಿದೆ (12 ಕಿ.ಮೀ ದೂರದಲ್ಲಿದೆ). ಬೀದರ್ ಮತ್ತು ಹುಮ್ನಾಬಾದ್‌ನಿಂದ ಜಲಸಂಗ್ವಿ ತಲುಪಲು ಬಸ್‌ಗಳು ಲಭ್ಯವಿದೆ.

ಉಳಿದುಕೊಳ್ಳಲು ವ್ಯವಸ್ಥೆ: ಜಲಸಂಗಿ ಯಿಂದ ಕೇವಲ12 ಕಿ.ಮೀ ದೂರದಲ್ಲಿರುವ ಹುಮ್ನಾಬಾದ್‌ನಲ್ಲಿ ಉಳಿದುಕೊಳ್ಳಲು ಹೋಟೆಲ್‌ಗಳು ಲಭ್ಯವಿವೆ.

Tour Location

Leave a Reply

Accommodation
Meals
Overall
Transport
Value for Money