Karnataka logo

Karnataka Tourism
GO UP
Image Alt

ಬುರುಡೆ ಜಲಪಾತ

separator
  /  ಬುರುಡೆ ಜಲಪಾತ

ಬುರುಡೆ ಜಲಪಾತ

ಅಮೋಘ ನೋಟಗಳು, ಹಚ್ಚ ಹಸಿರಿನ ಕಾಡುಗಳು ಮತ್ತು ಮಂಜಿನ ಬೆಟ್ಟಗಳ ಆಕರ್ಷಕ ಭೂದೃಶ್ಯಗಳಿಗೆ ಹೆಸರಾಗಿರುವ ಬುರುಡೆ ಜಲಪಾತವು ಈಗ ಆಕರ್ಷಕ ತಾಣವಾಗಿದೆ. ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಭೂಮಿಯ ಮೇಲಿನ ಸ್ವರ್ಗವೆಂದರೆ ಬುರುಡೆ ಜಲಪಾತ ಎಂದರೆ ತಪ್ಪಲ್ಲ. ಇಲ್ಲಿ ಕಂಡು ಬರುವ ಚಿಲಿಪಿಲಿ ಹಕ್ಕಿಗಳು ಮತ್ತು ಅವುಗಳ ಮಧುರ ಧ್ವನಿ, ಕಾಡಿನ ಪ್ರಾಣಿಗಳು ಮತ್ತು ಸಸ್ಯಗಳು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವನ್ನೇ ಧರೆಗಿಳಿಸುತ್ತವೆ. ಈ ಹಿಂದೆ ಬುರುಡೆ ಜಲಪಾತವು ಅಷ್ಟೊಂದು ಪ್ರಸಿದ್ಧ ತಾಣವಾಗಿರಲಿಲ್ಲ. ಈಗ ಎಲ್ಲ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈಗ ದೇಶಾದ್ಯಂತ ಪ್ರವಾಸಿಗರು ಮತ್ತು ಚಾರಣಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. 90 ಅಡಿ ಧುಮುಕುವ ಕಲ್ಲಿನ ಜಲಪಾತವು ಸಿದ್ದಾಪುರದಿಂದ 20 ಕಿಮೀ ದೂರದಲ್ಲಿದೆ ಮತ್ತು ಇನ್ನೊಂದು ಪ್ರಮುಖ ಪಟ್ಟಣವಾದ ಸಿರ್ಸಿಯಿಂದ 55 ಕಿಮೀ ದೂರದಲ್ಲಿದೆ. ಈ ಪ್ರದೇಶವು ಸಾಹಸಿಗರು ಹಂಬಲಿಸಬಹುದಾದ ಅತ್ಯಂತ ಬೇಡಿಕೆಯ ಮತ್ತು ಅಸಾಮಾನ್ಯ ತಾಣವಾಗಿದೆ.

ರಾಜ್ಯದ ಮತ್ತೊಂದು ದೊಡ್ಡ ನದಿಯ ಉಪನದಿಯಾದ ಇಲಿಮನೆ ಎಂಬ ನದಿಯಿಂದ ಇದು ರೂಪುಗೊಂಡಿರುವುದರಿಂದ ಇಲ್ಲಿಮನೆ ಜಲಪಾತ ಎಂದು ಕರೆಯಲಾಗುತ್ತದೆ. ಇದು ಅಮೋಘ ನೋಟಗಳು, ಹಚ್ಚ ಹಸಿರಿನ ಕಾಡುಗಳು ಮತ್ತು ಮಂಜಿನ ಬೆಟ್ಟಗಳ ಆಕರ್ಷಕ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಜಲಪಾತಗಳು ವಿವಿಧ ಹಂತಗಳಲ್ಲಿ 90 ಅಡಿ ಎತ್ತರದಲ್ಲಿ ಧುಮುಕುತ್ತವೆ ಮತ್ತು ಪ್ರತಿ ಹಂತದಲ್ಲೂ ನೈಸರ್ಗಿಕ ಕೊಳವಿದೆ.ಆದಾಗ್ಯೂ, ಯಾವುದೇ ಸಮಯದಲ್ಲಿ ಈ ಜಲಪಾತಕ್ಕೆ ಹೋಗುವುದು ಸೂಕ್ತವಲ್ಲ. ಟ್ರೆಕ್ಕಿಂಗ್, ಪಕ್ಷಿ ವೀಕ್ಷಣೆ, ನೇಚರ್ ವಾಕಿಂಗ್ ಗಾಗಿ ಅಥವಾ ಪ್ರಕೃತಿಯ ಮಡಿಲಲ್ಲಿ ಪುನಃಚೇತನಗೊಳ್ಳಲು ಮತ್ತು ವಿಶ್ರಾಂತಿ ಪಡೆಯಲು, ವನ ಸೌಂದರ್ಯದಲ್ಲಿ ಮಿಂದೇಳಲು ನೀವು ಒಂದರಿಂದ ಎರಡು ದಿನದ ಪ್ರವಾಸವನ್ನು ಇಲ್ಲಿಗೆ ಯೋಜಿಸಬಹುದು.
ಬುರುಡೆ ಜಲಪಾತದಲ್ಲಿ ಪಕ್ಷಿ ವೀಕ್ಷಣೆಯು ಪ್ರಕೃತಿ ಪ್ರಿಯರಿಗೆ ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ಇಷ್ಟವಾದ ಚಟುವಟಿಕೆ ಆಗಿದೆ. ಬುಲ್ಬುಲ್, ಮೈನಾ, ಜಂಗಲ್ ಫೌಲ್, ಪ್ಯಾರಾಕೆಟಗಳು, ಮರಕುಟಿಗಗಳು, ಮಿಂಚುಳ್ಳಿಗಳು, ಮಿನಿವೆಟ್‍ಗಳು ಮತ್ತು ಇನ್ನೂ ಹೆಚ್ಚಿನ ಕೆಲವು ವಲಸೆ ಹಕ್ಕಿಗಳನ್ನು ಸುಲಭವಾಗಿ ಇಲ್ಲಿ ನೋಡಬಹುದು.

ಕೈಗೊಳ್ಳಬಹುದಾದ ಚಟುವಟಿಕೆಗಳು

ಹೈಕಿಂಗ್- ನೀವು ಬುರುಡೆ ಜಲಪಾತವನ್ನು ಚಾರಣದ ಮೂಲಕ ತಲುಪಬಹುದು. ಇದು ನಿಜವಾಗಲೂ ಅತ್ಯುತ್ತಮ ಚಟುವಟಿಕೆ ಆಗಿದೆ. ನೀವು ಇದಕ್ಕೆ ಫಿಟ್ ಇದ್ದರೆ ಸಾಕು. ಇದು ಒಂದು ತರಹದ ಧ್ಯಾನವೇ ಆಗಿದೆ.ಹಚ್ಚ ಹಸಿರಿನ ಹಾದಿಗಳು ನಿಮ್ಮ ಚಾರಣದ ಶ್ರಮವನ್ನು ಕಡಿಮೆಗೊಳಿಸುತ್ತವೆ. ನೀವು ಪ್ರಕೃತಿಯೊಂದಿಗೆ ಸಂವಾದಿಸುತ್ತಾ ನಿಮ್ಮ ಶ್ರಮವನ್ನು ಮರೆಯುತ್ತೀರಿ. ಈ ಸ್ಥಳವು ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಪಾದಯಾತ್ರೆ ಮಾಡಲು ಮತ್ತು ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ. ದಟ್ಟವಾದ ಕಾಡಿನ ಹಚ್ಚ ಹಸಿರಿನ ಹಾದಿಗಳ ಮೂಲಕ ಸ್ಥಳೀಯರೊಂದಿಗೆ ಸಂವಹನ ನಡೆಸಬಹುದು ಮತ್ತು ಕೆಲವು ಸ್ಥಳೀಯ ಅಧಿಕೃತ ಆಹಾರವನ್ನು ನೀವು ಇಲ್ಲಿ ನಿರೀಕ್ಷಿಸಬಹುದು.
ಫೋಟೊಗ್ರಫಿ – ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಭೂಮಿಯ ಮೇಲಿನ ಸ್ವರ್ಗವೆಂದರೆ ಬುರುಡೆ ಜಲಪಾತ ಎಂದರೆ ತಪ್ಪಲ್ಲ. ಇಲ್ಲಿ ಕಂಡು ಬರುವ ಚಿಲಿಪಿಲಿ ಹಕ್ಕಿಗಳು ಮತ್ತು ಅವುಗಳ ಮಧುರ ಧ್ವನಿ, ಕಾಡಿನ ಪ್ರಾಣಿಗಳು ಮತ್ತು ಸಸ್ಯಗಳು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವನ್ನೇ ಧರೆಗಿಳಿಸುತ್ತವೆ. ಸಾಮಾಜಿಕ ಮಾಧ್ಯಮ ಅಥವಾ ವೈಯಕ್ತಿಕ ಸಂಗ್ರಹಕ್ಕಾಗಿ ಕೆಲವು ಅದ್ಭುತ ಭೂದೃಶ್ಯಗಳನ್ನು ಸೆರೆಹಿಡಿಯಲು ನಿಮಗೆ ಸಾಕಷ್ಟು ಅವಕಾಶ ಇರುತ್ತದೆ.
ಸೈಟ್ ನೋಡುವುದು – ಇಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತವೆ. ಪ್ರವಾಸಿಗರು ಇದರ ಪ್ರಕೃತಿ ಸೌಂದರ್ಯದಲ್ಲಿ ಮಿಂದೇಳುತ್ತಾರೆ. ಹೊನ್ನೆಮರಡು. ಉಂಚಳ್ಳಿ ಜಲಪಾತ, ತೈವಾರೆ ಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳು ಬುರುಡೆ ಜಲಪಾತಕ್ಕೆ ಹತ್ತಿರ ಇರುವ ಪ್ರದೇಶಗಳಾಗಿವೆ. ಬುರುಡೆ ಜಲಪಾತಕ್ಕೆ ಭೇಟಿ ನೀಡಿದಾಗ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ?

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಬುರುಡೆ ಜಲಪಾತವು ಶಿರಸಿ ಪಟ್ಟಣಕ್ಕೆ ಸಮೀಪದಲ್ಲಿದೆ. ಆದಾಗ್ಯೂ, ಹತ್ತಿರದ ಸಣ್ಣ ಪಟ್ಟಣವು ಸುಮಾರು 24 ಕಿಮೀ ದೂರದಲ್ಲಿದೆ .

ವಿಮಾನದ ಮೂಲಕ
ಹತ್ತಿರದ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಮಂಗಳೂರು. 228 ಕಿಮೀ ದೂರವನ್ನು ಸರಿಸುಮಾರು 4 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಬಹುದು.

ರೇಲ್ವೆ ಮೂಲಕ
ಶಿವಮೊಗ್ಗವು 128 ಕಿಮೀ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣವಾಗಿದೆ .ಈ ಜಲಪಾತವನ್ನು ತಲುಪಲು ಸುಮಾರು 2 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ಮುಂಬೈ ಮತ್ತು ನೆರೆಯ ರಾಜ್ಯಗಳ ಇತರ ನಗರಗಳಿಂದ ಇಲ್ಲಿಗೆ ರೈಲುಗಳು ಲಭ್ಯವಿವೆ.

ರಸ್ತೆ ಮೂಲಕ
ಇದಕ್ಕೆ ಹತ್ತಿರದ ಪಟ್ಟಣವೆಂದರೆ ಸಿದ್ದಾಪುರ . ಇದು ಸುಮಾರು 24 ಕಿಮೀ ದೂರದಲ್ಲಿದೆ ಮತ್ತು ಜಲಪಾತವನ್ನು ತಲುಪಲು ಸುಮಾರು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿಗೆ ಸರ್ಕಾರಿ ಬಸ್ಸುಗಳು ಅಥವಾ ಖಾಸಗಿ ಬಸ್ಸುಗಳು ರಾಜ್ಯದ ವಿವಿಧ ಭಾಗಗಳಿಂದ ಸಂಚರಿಸುತ್ತವೆ. ಆದಾಗ್ಯೂ, ತಲುಪಲು ಉತ್ತಮ ಮಾರ್ಗವೆಂದರೆ ಖಾಸ್ಗಿ ಕ್ಯಾಬ್ ಅಥವಾ ಸ್ವಂತ ವಾಹನ ಆಗಿರುತ್ತದೆ.

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ

ಇತರ ಯಾವುದೇ ಜಲಪಾತದಂತೆ, ಬುರುಡೆಗೆ ಮಳೆಗಾಲದ ನಂತರವೂ ಭೇಟಿ ನೀಡಬಹುದು. ಈ ಸಮಯದಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ಅಕ್ಟೋಬರ್‌ನಿಂದ ಜನವರಿ ವರೆಗೆ ಆನಂದಿಸಬಹುದು ಮತ್ತು ಹವಾಮಾನವು ಆಹ್ಲಾದಕರವಾಗಿರುತ್ತದೆ ಹಾಗೂ ಜಲಪಾತಗಳು ಘರ್ಜಿಸುತ್ತವೆ. ಬೇಸಿಗೆ ಸಮಯದಲ್ಲಿ ಈ ಪ್ರದೇಶವು ಶುಷ್ಕವಾಗಿರುತ್ತದೆ . ಆ ಸಮಯದಲ್ಲಿ ಈ ಜಲಪಾತವು ನಿಮ್ಮನ್ನು ಆಕರ್ಷಿಸುವುದಿಲ್ಲ. ಮಳೆಗಾಲದ ಸಮಯದಲ್ಲಿ ಜಲಪಾತಕ್ಕೆ ಹೋಗುವ ಮಾರ್ಗವು ತುಂಬಾ ಜಾರುವುದರಿಂದ ಅಪಾಯಕಾರಿಯಾಗಬಹುದು . ಹೀಗಾಗಿ ನಂತರದ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಇತರೆ ಮಾಹಿತಿ

1. ಮಾನ್ಸೂನ್ ಋತುವಿನಲ್ಲಿ ಇಲ್ಲಿಗೆ ಬರಬೇಡಿ. ಏಕೆಂದರೆ ಆ ಸಮಯದಲ್ಲಿ ಈ ಪ್ರದೇಶವು ಕೆಸರಿನಿಂದ ಕೂಡಿರುತ್ತದೆ. ನಿಮಗೆ ತೊಂದರೆಯನ್ನುಂಟು ಮಾಡುತ್ತದೆ.
2. ಜಲಪಾತವು ಸಾಕಷ್ಟು ಸವಾಲಿನಿಂದ ಕೂಡಿದ್ದು ಅಪಾಯಕಾರಿ ಆಗಿದೆ. ದಯವಿಟ್ಟು ಜಲಪಾತದ ಕೆಳಗೆ ಸ್ನಾನ ಮಾಡಲು ಅಥವಾ ಅದನ್ನು ಪ್ರವೇಶಿಸಲು ಮುಂದಾಗಬೇಡಿ.
3. ಪ್ರದೇಶದಲ್ಲಿ ಜಿಗಣೆಗಳು ಬರುವ ಸಾಧ್ಯತೆಯಿದೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.
4. ಸೂಕ್ತವಾದ ಟ್ರೆಕ್ಕಿಂಗ್ ಶೂಗಳು ಮತ್ತು ಬಟ್ಟೆಗಳನ್ನು ಧರಿಸಿ.
5. ಚಾರಣವು ದೀರ್ಘ ಮತ್ತು ಶ್ರಮದಾಯಕವಾಗಿರುವುದರಿಂದ ನಿಮ್ಮ ಆಹಾರ, ನೀರು ಮತ್ತು ಇತರ ಅವಶ್ಯಕ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಿ.
6. ಈ ಪ್ರದೇಶದಲ್ಲಿ ಏಕಾಂಗಿಯಾಗಿ ಪ್ರಯಾಣಿಸಬೇಡಿ ಅಥವಾ ಚಾರಣ ಮಾಡಬೇಡಿ. ಅಧಿಕೃತ ಪ್ರವಾಸ ನಿರ್ವಾಹಕರೊಂದಿಗೆ ಪ್ರಯಾಣಿಸಲು ಸಲಹೆ ನೀಡಲಾಗುತ್ತದೆ.
7. ಪ್ರದೇಶದಲ್ಲಿ ಇಂಟರ್ನೆಟ್/ಫೋನ್ ಸಂಪರ್ಕ ದುರ್ಬಲವಾಗಿದೆ. ಈ ಕುರಿತು ಎಚ್ಚರದಿಂದ ಇರಿ.

ಹತ್ತಿರದಲ್ಲಿರುವ ಸ್ಥಳಗಳು:

ಹೊನ್ನೆಮರಡು. ಉಂಚಳ್ಳಿ ಜಲಪಾತ, ತೈವಾರೆ ಕೊಪ್ಪ ಸಿಂಹ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳು ಬುರುಡೆ ಜಲಪಾತಕ್ಕೆ ಹತ್ತಿರ ಇರುವ ಪ್ರದೇಶಗಳಾಗಿವೆ. ಬುರುಡೆ ಜಲಪಾತಕ್ಕೆ ಭೇಟಿ ನೀಡಿದಾಗ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು.