Karnataka logo

Karnataka Tourism
GO UP

ಗುಡೇಕೋಟೆ ಕರಡಿ ಅಭಯಾರಣ್ಯ

separator
ಕೆಳಗೆ ಸ್ಕ್ರಾಲ್ ಮಾಡಿ

ಗುಡೇಕೋಟೆ ಕರಡಿ ಅಭಯಾರಣ್ಯ: ಕರಡಿಗಳನ್ನು ಸಂರಕ್ಷಿಸಲು ಬಳ್ಳಾರಿ ಜಿಲ್ಲೆಯ ಗುಡೇಕೋಟೆಯಲ್ಲಿ ಕರಡಿ ಅಭಯಾರಣ್ಯವನ್ನು ಸ್ಥಾಪಿಸಲಾಗಿದೆ. ಗುಡೇಕೋಟೆ ಕರಡಿ ವನ್ಯಜೀವಿ ಅಭಯಾರಣ್ಯವು ಗುಡೇಕೋಟೆ ಮೀಸಲು ಅರಣ್ಯ ಮತ್ತು ಹಲ್ಸಾಗರ ಮೀಸಲು ಅರಣ್ಯವನ್ನು ಒಳಗೊಂಡಿರುವ 38.5 ಚದರ ಕಿ.ಮೀ. ಕ್ಷೇತ್ರದಲ್ಲಿ ವ್ಯಾಪಿಸಿದೆ. 

ಗುಡೇಕೋಟೆ ಕರಡಿ ಅಭಯಾರಣ್ಯದ ಮುಖ್ಯಾಂಶಗಳು

  • ಪ್ರಾಣಿಗಳು: ಗುಡೇಕೋಟೆಯಲ್ಲಿ ಕರಡಿಗಳಲ್ಲದೆ ಚಿರತೆಗಳು, ಕಾಡು ಬೆಕ್ಕು, ಆಮೆ, ನರಿ, ಕಾಡುಹಂದಿಗಳು, ಪ್ಯಾಂಗೊಲಿನ್ ಇತ್ಯಾದಿ ಇತರ ಪ್ರಮುಖ ನಿವಾಸಿಗಳಾಗಿವೆ. 
  • ಪಕ್ಷಿಗಳು: ಗುಡೇಕೋಟೆ ಕರಡಿ ಅಭಯಾರಣ್ಯದಲ್ಲಿ 130 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಹದ್ದುಗಳು, ಫ್ಲೈ ಕ್ಯಾಚರ್ ಇತ್ಯಾದಿಗಳು ಪ್ರಮುಖವಾಗಿವೆ. 
  • ಸರೀಸೃಪಗಳು: ವಿಷಕಾರಿ ಹಾವುಗಳಾದ ವೈಪರ್, ಕ್ರೈಟ್ಸ್, ನಾಗರ ಹಾವು ಮತ್ತು ರೆಡ್ ಸ್ಯಾಂಡ್ ಬೋವಾ ಕೂಡ ಗುಡೇಕೋಟೆಯಲ್ಲಿ ಕಂಡುಬರುತ್ತವೆ.
  • ಸಸ್ಯವರ್ಗ: ಗುಡೇಕೋಟೆ ಕಾಡಿನಲ್ಲಿ ಕಸೀತಾ ಫಲ, ಜಾಮೂನ್ ಇತ್ಯಾದಿ ಸಾಕಷ್ಟು ಹಣ್ಣಿನ ಮರಗಳಿವೆ. ಒಣ ಪತನಶೀಲ ಮತ್ತು ಮುಳ್ಳಿನ ಪೊದೆ ಕಾಡುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 

ತಲುಪುವುದು ಹೇಗೆ: ಗುಡೇಕೋಟೆ ಬೆಂಗಳೂರಿನಿಂದ 269 ಕಿ.ಮೀ ಮತ್ತು ಬಳ್ಳಾರಿಯಿಂದ 54 ಕಿ.ಮೀ. ದೂರದಲ್ಲಿದೆ.  ಬಳ್ಳಾರಿಯ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (65 ಕಿ.ಮೀ ದೂರದಲ್ಲಿದೆ) ಮೊಳಕಾಲ್ಮುರು ರೈಲು ನಿಲ್ದಾಣವು 22 ಕಿ.ಮೀ ದೂರದಲ್ಲಿದೆ. ಗುಡೇಕೋಟೆ ತಲುಪಲು ಟ್ಯಾಕ್ಸಿಯನ್ನು ಬಳ್ಳಾರಿ ಅಥವಾ ಮೊಳಕಾಲ್ಮುರಿಂದ ಬಾಡಿಗೆಗೆ ಪಡೆಯಬಹುದಾಗಿದೆ. 

ವಸತಿ: ಗುಡೇಕೋಟೆಯಲ್ಲಿ ವಾಸ್ತವ್ಯದ ಆಯ್ಕೆಗಳಿಲ್ಲ. ಬಳ್ಳಾರಿ ಹತ್ತಿರದ ದೊಡ್ಡ ನಗರವಾಗಿದ್ದು (54 ಕಿ.ಮೀ) ಹೆಚ್ಚಿನ ಸಂಖ್ಯೆಯ ಹೋಟೆಲ್ ಆಯ್ಕೆಗಳು ಲಭ್ಯವಿದೆ.

Tour Location