Karnataka logo

Karnataka Tourism
GO UP
Cauvery Sankramana Coorg

ಕಾವೇರಿ ಸಂಕ್ರಮಣ

separator
  /  ಕಾವೇರಿ ಸಂಕ್ರಮಣ

ಕಾವೇರಿ ಸಂಕ್ರಮಣ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ ಮಧ್ಯದಲ್ಲಿ (ಹಿಂದೂ ಕ್ಯಾಲೆಂಡರ್ ಪ್ರಕಾರ ತುಲಾ ತಿಂಗಳ ಮೊದಲ ದಿನ) ಕಾವೇರಿ ಸಂಕ್ರಮಣವನ್ನು ಆಚರಿಸಲಾಗುತ್ತದೆ. ತಲಕಾವೇರಿ ದೇವಸ್ಥಾನದಲ್ಲಿರುವ ಪುಷ್ಕರಿಣಿ ಸಮೀಪದ ಕುಂಡಿಕೆಯಿಂದ ಕಾವೇರಿ ನದಿ ಉಗಮವಾಗುತ್ತದೆ (ತೀರ್ತೋದ್ಭವ) ಮತ್ತು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಭಕ್ತರು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಆಗಮಿಸುತ್ತಾರೆ. ಸ್ಥಳೀಯರು ಪವಿತ್ರವೆಂದು ಪರಿಗಣಿಸಿ ಈ ನೀರನ್ನು ಸಂಗ್ರಹಿಸಿ ಸಂರಕ್ಷಿಸುತ್ತಾರೆ. 

ಕಾವೇರಿ ಸಂಕ್ರಮಣವನ್ನು ದೇವಾಲಯಗಳಲ್ಲಿ ಮತ್ತು ಕೊಡವ ಜನರ ಮನೆಗಳಲ್ಲಿ ವಿಶೇಷ ಪೂಜೆಯಿಂದ ಆಚರಿಸಲಾಗುತ್ತದೆ. ಕಾವೇರಿ ಜಾತ್ರೆ ಸಂದರ್ಶಕರಿಗೆ ಸಾಕಷ್ಟು ಖರೀದಿ ಆಯ್ಕೆಗಳು, ಆಹಾರ ಮಳಿಗೆಗಳು ಮತ್ತು ಮೋಜಿನ ಸವಾರಿಗಳೊಂದಿಗೆ ಮನರಂಜನೆ ನೀಡುತ್ತದೆ.

ಕಾವೇರಿ ಸಂಕ್ರಮಣ, 2020 ರ ದಿನಾಂಕ ಮತ್ತು ಸಮಯವನ್ನು 2020 ಅಕ್ಟೋಬರ್ 17, ರಾತ್ರಿ 9.14 ಕ್ಕೆ ನಿಗದಿಪಡಿಸಲಾಗಿದೆ. 

ಹತ್ತಿರದಲ್ಲಿ ಇನ್ನೇನಿದೆ? ಅಬ್ಬೆ ಫಾಲ್ಸ್ (52 ಕಿ.ಮೀ), ಕಾವೇರಿ ನಿಸರ್ಗಧಾಮ (72 ಕಿ.ಮೀ), ದುಬಾರೆ (72 ಕಿ.ಮೀ), ಮಡಿಕೇರಿ ಪಟ್ಟಣ (47 ಕಿ.ಮೀ), ಭಾಗಮಂಡಲ (7 ಕಿ.ಮೀ) ತಲಕಾವೇರಿಯೊಂದಿಗೆ ಭೇಟಿ ಕೊಡಬಹುದಾದ ಕೊಡಗು ಜಿಲ್ಲೆಯ ಕೆಲವು ಜನಪ್ರಿಯ ಪ್ರವಾಸಿ ಆಕರ್ಷಣೆಗಳು.

ತಲುಪುವುದು ಹೇಗೆ: ತಲಕಾವೇರಿ ಬೆಂಗಳೂರಿನಿಂದ 312 ಕಿ.ಮೀ ಮತ್ತು ಮಡಿಕೇರಿ ಪಟ್ಟಣದಿಂದ 47 ಕಿ.ಮೀ ದೂರದಲ್ಲಿದೆ. ಕಣ್ಣೂರು ಹತ್ತಿರದ ವಿಮಾನ ನಿಲ್ದಾಣ (119 ಕಿ.ಮೀ). ಮೈಸೂರು, ಹಾಸನ ಮತ್ತು ಮಂಗಳೂರು ತಲಕವೇರಿಯನ್ನು ತಲುಪಲು ಪ್ರಮುಖ ರೈಲು ನಿಲ್ದಾಣಗಳಾಗಿವೆ (ಇವೆಲ್ಲವೂ ತಲಕವೇರಿಯಿಂದ 140-150 ಕಿ.ಮೀ ದೂರದಲ್ಲಿವೆ). ದಕ್ಷಿಣ ಕರ್ನಾಟಕದ ಎಲ್ಲಾ ಭಾಗಗಳಿಂದ ಮಡಿಕೇರಿ ತಲುಪಲು ಬಸ್ಸುಗಳು ಲಭ್ಯವಿವೆ ಮತ್ತು ಕಾವೇರಿ ಸಂಕ್ರಮಣ ಉತ್ಸವದ ಕೇಂದ್ರವಾದ ತಲಕಾವೇರಿಗೆ ಭೇಟಿ ನೀಡಲು ಮಡಿಕೇರಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹೋಂ ಸ್ಟೇಗಳು, ಬಜೆಟ್ ಹೋಟೆಲ್‌ಗಳು ಮತ್ತು ಐಷಾರಾಮಿ ರೆಸಾರ್ಟ್‌ಗಳಿವೆ.