Karnataka logo

Karnataka Tourism
GO UP
Republic Day

ಗಣರಾಜ್ಯೋತ್ಸವ 2021

ಭಾರತವು 72ನೇ ಗಣರಾಜ್ಯೋತ್ಸವ ಆಚರಣೆಯ ಹೊಸ್ತಿಲಲ್ಲಿದೆ. ಹಿಂದನ ದಿನ ಸಂಜೆ ರಾಷ್ಟ್ರಪತಿಯವರ ದೇಶಕ್ಕೆ ಸಂದೇಶ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಣೆ ಪ್ರಕ್ರಿಯೆ ಆರಂಭವಾಗುತ್ತದೆ. ನವದೆಹಲಿಯ ರಾಜಪಥ ಸುಸಜ್ಜಿತ ವರ್ಣರಂಜಿತ ಗಣರಾಜ್ಯೋತ್ಸವದ ಆಚರಣೆಗೆ ಸಾಕ್ಷಿಯಾಗುತ್ತದೆ. ಮೊದಲಿಗೆ ರಾಷ್ಟ್ರದ ಪ್ರಧಾನಮಂತ್ರಿ ಹಾಗೂ ಇತರ ಗಣ್ಯರಿಂದ ದೇಶಕ್ಕೆ ತ್ಯಾಗ, ಬಲಿದಾನದ ಸಂಕೇತವಾದ ಅಮರ ಜವಾನ್ ಜ್ಯೋತಿಯಲ್ಲಿ ಪುಷ್ಪನಮನ ಸಲ್ಲಿಸುತ್ತಾರೆ.

ನಂತರ ಅತೀಗಣ್ಯ ವ್ಯಕ್ತಿಗಳಾದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ವಿದೇಶಿ ಮುಖ್ಯ ಅತಿಥಿಯವರನ್ನು ಬರಮಾಡಿಕೊಳ್ಳಲು ಪ್ರಧಾನಮಂತ್ರಿ ರಾಜಪಥದ ಗಣರಾಜ್ಯೋತ್ಸವ ಆಚರಣೆ ವೇದಿಕೆಗೆ ಕರೆದೊಯ್ಯುತ್ತಾರೆ. ತ್ರಿವರ್ಣ ಧ್ವಜಾರೋಹಣ ನೆರವೇರಿಸುದರೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಇದರ ಜೊತೆಗೆ ಭೂಸೇನೆ, ವಾಯುಸೇನೆ, ನೌಕಾಸೇನೆ ವತಿಯಿಂದ ಪಥಸಂಚಲನ ಆರಂಭವಾಗಿ ಅದರ ವಿವಿಧ ಪ್ರಕಾರಗಳ ಶಕ್ತಿ ಮತ್ತು ಸಾಹಸ ಪ್ರದರ್ಶನದೊಂದಿಗೆ ಅಂತ್ಯವಾಗುತ್ತದೆ ಮತ್ತು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ತಬ್ಧಚಿತ್ರಗಳು ಮತ್ತು ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಒಂದಾದ ನಮ್ಮ ರಾಷ್ಟ್ರಕ್ಕೆ ಗಣರಾಜ್ಯೋತ್ಸವವು ಒಂದು ದೊಡ್ಡ ಮಹತ್ವವನ್ನು ಹೊಂದಿದೆ. ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು, ಇದು ಪ್ರಜಾಪ್ರಭುತ್ವ, ಸಾರ್ವಭೌಮತ್ವ ಮತ್ತು ಜಾತ್ಯತೀತ ದೇಶವಾಯಿತು. ಭಾರತದ ಸಂವಿಧಾನವು ಅವರ ಧರ್ಮ, ಜಾತಿ, ಮತ, ಲಿಂಗ ಇತ್ಯಾದಿಗಳನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸೂಚಿಸುತ್ತದೆ.

1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ, ಸಂವಿಧಾನ ಸಭೆಗೆ ಭಾರತದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಸಂವಿಧಾನ ಸಭೆಯ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರೋಕ್ಷವಾಗಿ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿದ್ದರು.

ಭಾರತಕ್ಕೆ, ಇತರ ಸ್ವತಂತ್ರ ರಾಷ್ಟ್ರಗಳಂತೆ, ಸಂವಿಧಾನವು ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಅದು ತನ್ನ ನಾಗರಿಕರಿಗೆ ತಮ್ಮದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ರೂಪಿಸಲು ಅಧಿಕಾರ ನೀಡುತ್ತದೆ.

ಕರ್ನಾಟಕದಲ್ಲಿ ಗಣರಾಜ್ಯೋತ್ಸವದ ಆಚರಣೆಗಳು ರಾಜಪಥದಲ್ಲಿ ನಡೆಯುವಷ್ಟೇ ವರ್ಣಮಯ ಮತ್ತು ಆಕರ್ಷಕವಾಗಿ ಆಚರಿಸಲಾಗುತ್ತದೆ. ಪ್ರಭಾವಶಾಲಿ ಪಥಸಂಚಲನ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ರಕ್ಷಣಾ ಸಿಬ್ಬಂದಿಯ ವಿಸ್ಮಯಕಾರಿ ಸಾಹಸಗಳು ಪ್ರೇಕ್ಷಕರನ್ನು ಮಗ್ನಗೊಳಿಸುತ್ತವೆ.

ಇದು ಮಾತ್ರವಲ್ಲ, ಹಲವಾರು ರಂಗಭೂಮಿ ಗ್ರಾಮ ಕಲಾವಿದರು, ರಾಜ್ಯದ ವಿವಿಧ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ರಾಜಪಥನಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಾರೆ. 71ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ, ಶಿವಕುಮಾರ ರಂಗ ಪ್ರಯೋಗ ಶಾಲೆಯ 28 ವಿದ್ಯಾರ್ಥಿಗಳು ‘ಅನುಭವ ಮಂಟಪ’ ಎಂದು ಕರೆಯಲ್ಪಡುವ ಮಾನವರ ಇತಿಹಾಸದಲ್ಲಿ ಮೊಟ್ಟಮೊದಲ ಸಾಮಾಜಿಕ-ಧಾರ್ಮಿಕ ಸಂಸತ್ತನ್ನು ಪ್ರದರ್ಶಿಸಿದರು.

ಅನುಭವ ಮಂಟಪದ ತತ್ತ್ವಶಾಸ್ತ್ರವನ್ನು 12ನೇ ಶತಮಾನದ ಸಾಮಾಜಿಕ ಸುಧಾರಕ ಮತ್ತು ಸಂತ ಬಸವೇಶ್ವರರು ಪ್ರತಿಪಾದಿಸಿದರು.

ಮಾನವ ಅಸ್ತಿತ್ವದ ಇತಿಹಾಸದಲ್ಲಿ ಮೊಟ್ಟಮೊದಲ ಸಾಮಾಜಿಕ-ಧಾರ್ಮಿಕ ಸಂಸತ್ತು ಎಂದು ಪರಿಗಣಿಸಲ್ಪಟ್ಟ ಇದು ಸಂತರು, ದಾರ್ಶನಿಕರು ಮತ್ತು ಯೋಗಿಗಳ ಶಾಲೆಯಾಗಿದೆ. ಅಕಾಡೆಮಿಯ ಉದ್ದೇಶ ಸಮಾನತೆ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಹರಡುವುದು.

ರಾಜ್ಯವು ತನ್ನ ವಿಶೇಷ ಪ್ರಸ್ತುತಿಗಳೊಂದಿಗೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತಿದೆ . ಆಗ ಗಣರಾಜ್ಯೋತ್ಸವ ಆಚರಣೆಯು ರಾಜಪಥದಲ್ಲಿಯೇ ಇರಲಿ ಅಥವಾ ರಾಜ್ಯದಲ್ಲಿಯೇ ಇರಲಿ, ದೊಡ್ಡದಾಗಲಿ ಅಥವಾ ಸಣ್ಣದಾಗಲಿ, ದೇಶದ ಜನರ ಮನೋಭಾವವನ್ನು ಮೆಚ್ಚುವುದು ಯೋಗ್ಯವಾಗಿದೆ.