ನಿಮ್ಮ ಕುಟುಂಬದೊಂದಿಗೆ ಕರ್ನಾಟಕದ ಉತ್ತಮ ಸ್ಥಳಗಳಿಗೆ ಪ್ರವಾಸ ಮಾಡಿ
ಒತ್ತಡದ ಜೀವನಶೈಲಿಯಿಂದ ಹೊರಬರಲು ನಿಮ್ಮ ಪ್ರೀತಿಯ ಕುಟುಂಬದೊಂದಿಗಿನ ಪ್ರವಾಸಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ನೀವು ಕರ್ನಾಟಕದಲ್ಲಿ ಅಥವಾ ರಾಜ್ಯದ ಗಡಿಯ ಸಮೀಪದಲ್ಲೋ ವಾಸಿಸುತ್ತಿದ್ದರೆ, ನಿಮ್ಮನ್ನು ಅದೃಷ್ಟವಂತರೆಂದು ಪರಿಗಣಿಸಿ, ಏಕೆಂದರೆ ಕರ್ನಾಟಕವು ನಿಮ್ಮ ಕುಟುಂಬದೊಂದಿಗೆ ಆಗಾಗ್ಗೆ ಹೋಗಬಹುದಾದ ಅಸಂಖ್ಯಾತ ಅದ್ಭುತ ಮತ್ತು ಸಾಹಸಮಯ ತಾಣಗಳಿಂದ ಕೂಡಿದೆ. ಪಶ್ಚಿಮ ಘಟ್ಟಗಳು, ಕನ್ನಡ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯಂತಹ ಆಯಕಟ್ಟಿನ ಪ್ರದೇಶಗಳ ಮಧ್ಯೆ ನೆಲೆಗೊಂಡಿರುವ ಕರ್ನಾಟಕವು ಪರ್ವತಗಳು, ಕಡಲತೀರಗಳು, ಜಲಪಾತಗಳು, ಕಾಡುಗಳು, ತೋಟಗಳು ಮತ್ತು ಸರೋವರಗಳಂತಹ ಪ್ರಕೃತಿಯ ಎಲ್ಲಾ ಕೊಡುಗೆಗಳನ್ನು ಪೋಷಿಸುತ್ತದೆ. ರಾಜ್ಯದಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯು ಅದರ ಶ್ರೀಮಂತ ಪರಂಪರೆ, ಸ್ಥಬ್ದಗೊಳಿಸುವ ವಾಸ್ತುಶಿಲ್ಪ ಮತ್ತು ಸ್ಮಾರಕಗಳು, ಗತವೈಭವದ ಇತಿಹಾಸಗಳು ಮತ್ತು ಇನ್ನೂ ಹೆಚ್ಚಿನವುಗಳು ಸಂದರ್ಶಕರನ್ನು ಮತ್ತು ನಿವಾಸಿಗಳನ್ನು ಆಕರ್ಷಿಸಲು ಕಾರಣವಾಗಿದೆ.
ನೀವು ರಾಜ್ಯದ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿಯ ಮೂಲಕ ಪ್ರವಾಸ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಕುಟುಂಬದೊಂದಿಗೆ ನೀವು ಭೇಟಿ ನೀಡಬಹುದಾದ ಪ್ರಮುಖ 10 ಸ್ಥಳಗಳ ಪಟ್ಟಿ ಇಲ್ಲಿದೆ.
ಬೆಂಗಳೂರು
ರಾಜ್ಯ ರಾಜಧಾನಿ, ಹೆಚ್ಚಾಗಿ ಟೆಕ್ ಹಬ್ಗಳು, ಪಬ್ಗಳು ಮತ್ತು ಬಿಡುವಿಲ್ಲದ ಸಂಚಾರಕ್ಕಾಗಿ ಹೆಸರುವಾಸಿಯಾಗಿದೆ, ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್, ಟಿಪ್ಪು ಸುಲ್ತಾನ್ನ ಬೇಸಿಗೆ ಅರಮನೆ, ಸಿಟಿ ಪ್ಯಾಲೇಸ್, ಎಚ್ಎಎಲ್ ಮ್ಯೂಸಿಯಂ ಮತ್ತು ಲುಂಬಿನಿ ಗಾರ್ಡನ್ನಂತಹ ಕೆಲವು ಅದ್ಭುತ ಪ್ರವಾಸಿ ತಾಣಗಳಿಗೆ ನೆಲೆಯಾಗಿದೆ.
ಮೈಸೂರು
ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ನಗರಗಳಲ್ಲಿ ಒಂದಾದ ಮೈಸೂರು ತನ್ನ ಭವ್ಯವಾದ ಮೈಸೂರು ಅರಮನೆಗೆ ಹೆಸರುವಾಸಿಯಾಗಿದೆ. ಮೈಸೂರು ಸಾಮ್ರಾಜ್ಯದ ರಾಜಧಾನಿಯಾದ ನಗರವು ಮೃಗಾಲಯವನ್ನು ಹಾಗೂ ಹಲವಾರು ದೇವಾಲಯಗಳನ್ನು ಹೊಂದಿದೆ. ನಗರದ ಹೊರವಲಯದ ಸಮೀಪವಿರುವ ಚಾಮುಂಡಿ ಬೆಟ್ಟಗಳ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಬೃಂದಾವನ ಉದ್ಯಾನಗಳು ಇತರ ಜನಪ್ರಿಯ ಪ್ರವಾಸಿ ತಾಣಗಳಾಗಿವೆ.
ಹಂಪಿ
ಒಂದಾನೊಂದು ಕಾಲದಲ್ಲಿ ಭವ್ಯ ವಿಜಯನಗರ ರಾಜವಂಶದ ರಾಜಧಾನಿಯಾಗಿದ್ದ ಹಂಪಿಯು ಕರ್ನಾಟಕದ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ವಿಜಯನಗರ ಸಾಮ್ರಾಜ್ಯದ ಆಸಕ್ತಿದಾಯಕ ಅವಶೇಷಗಳಿಂದ ಹಿಡಿದು ಅದ್ಭುತವಾದ ದೇವಾಲಯಗಳವರೆಗೆ ಅಥವಾ ತುಂಗಭದ್ರಾ ನದಿಯ ಅಣೆಕಟ್ಟಿನವರೆಗೆ ಹಳೆಯ ನಗರವು ಮೋಹಕ ಸೌಂದರ್ಯದ ಜೊತೆಗೆ ಇತಿಹಾಸ ಮತ್ತು ಪರಂಪರೆಯ ಕಂಪನ್ನು ಹೊರಸೂಸುತ್ತದೆ. ‘ಸಪ್ತಸ್ವರ’ ರಾಗಗಳನ್ನು ಮೊಳಗಿಸುವ ಸಂಗೀತ ಸ್ತಂಭವಿರುವ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ
ಚಿತ್ರದುರ್ಗ ಕೋಟೆ
ದೊಡ್ಡ ಕಲ್ಲಿನಿಂದ ಕೆತ್ತಿದ ಕೋಟೆಯು ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಆಳಿದ ಮಹಾನ್ ಆಡಳಿತಗಾರರ ಪರಾಕ್ರಮ ಮತ್ತು ಶೌರ್ಯಕ್ಕೆ ಸಾಕ್ಷಿಯಾಗಿದೆ. ಕೋಟೆಯ ವಿಸ್ತಾರವಾದ ಅವಶೇಷಗಳು, ಉತ್ತಮವಾಗಿ ನಿರ್ವಹಿಸಲ್ಪಟ್ಟ ವಾಸ್ತುಶಿಲ್ಪ, ಆಕರ್ಷಕವಾದ ನೋಟ, ಐತಿಹಾಸಿಕ ಪರಂಪರೆ ಮತ್ತು ಆಕರ್ಷಕ ದೇವಾಲಯಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ.
ಕೊಡಗು
ಕಾಫಿ ಮತ್ತು ಮಸಾಲೆ ತೋಟಗಳು, ಭವ್ಯವಾದ ಅರಣ್ಯ ಪ್ರದೇಶ, ಬೆರಗುಗೊಳಿಸುವ ಕಣಿವೆಗಳು ಮತ್ತು ಜಲಪಾತಗಳು ಮತ್ತು ಈ ಸ್ಥಳದ ಸದಾ ಮಂಜಿನಿಂದ ಕೂಡಿದ ಭೂದೃಶ್ಯವು ಕೊಡಗನ್ನು ಪ್ರೀತಿಯಿಂದ ‘ಭಾರತದ ಸ್ಕಾಟ್ಲ್ಯಾಂಡ್’ ಎಂದು ಕರೆಯುವಂತೆ ಮಾಡುತ್ತದೆ. ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ವಿಹಾರಗಳು, ತಲಕಾವೆರಿ ಮತ್ತು ರಾಜಾ ಸೀಟ್ ನೊಂದಿಗೆ, ಕೊಡಗು ವಿಶೇಷವಾಗಿ ಮಳೆಗಾಲದಲ್ಲಿ ಒಂದು ಪರಿಪೂರ್ಣ ಕೌಟುಂಬಿಕ ಪ್ರವಾಸಿ ತಾಣವಾಗಿದೆ.
ಕಬಿನಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲ ಕ್ರೀಡೆಗಳು ಅಥವಾ ದಡದಲ್ಲಿ ಕ್ಯಾಂಪಿಂಗ್ ಮಾಡುವವರೆಗೆ, ಕಬಿನಿಯು ತನ್ನ ಪ್ರವಾಸಿಗರಿಗೆ ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಇಲ್ಲಿಗೆ ಬರುವ ಎಲ್ಲಾ ಪ್ರಕೃತಿ ಪ್ರಿಯರಿಗೆ ಇದು ಸೂಕ್ತವಾದ ರಜೆಯ ತಾಣವಾಗಿದೆ.
ಗೋಕರ್ಣ
ನೀವು ಕರ್ನಾಟಕದಲ್ಲಿದ್ದರೆ ಕರ್ನಾಟಕ-ಗೋವಾ ಗಡಿಯಲ್ಲಿರುವ ಗೋಕರ್ಣವು ಸಮುದ್ರ ಪ್ರಿಯರಿಗೆ ಸ್ವರ್ಗವಾಗಿದೆ. ಇದು ತನ್ನ ಅತೀ ಉತ್ತಮ ಸ್ಥಿತಿಯಲ್ಲಿದ್ದ ಗೋವಾದ ನೆನಪನ್ನು ಪ್ರಶಾಂತತೆಯ ಅನುಭವದೊಂದಿಗೆ ನೀಡುತ್ತದೆ. ಸುಂದರವಾದ ಕಡಲತೀರಗಳು ಮತ್ತು ಸ್ಥಬ್ಧಗೊಳಿಸುವ ದೇವಾಲಯಗಳು ಬೀಚ್ ನಗರಕ್ಕೆ ಭೇಟಿ ನೀಡಲು ಯೋಗ್ಯವಾಗಿವೆ.
ಶ್ರವಣಬೆಳಗೊಳ
ಜೈನ ಧರ್ಮದ ಸಂಸ್ಥಾಪಕರ ಪುತ್ರ ಬಾಹುಬಲಿಯ ಅತಿದೊಡ್ಡ ಏಕಶಿಲೆಯ ಪ್ರತಿಮೆಗೆ ನೆಲೆಯಾಗಿರುವ ಶ್ರವಣಬೆಳಗೋಳವು, ವಿಶ್ವದಾದ್ಯಂತದ ಜೈನರಿಗೆ ಯಾತ್ರಾಸ್ಥಳವಾಗಿದೆ. ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ಬರಿಗಾಲಿನಿಂದ ನಡೆದು ಪ್ರತಿಮೆಯ ಬುಡದಲ್ಲಿ ನಡೆಯುವ ಆಚರಣೆಗಳು ಮತ್ತು ಸಮಾರಂಭಗಳನ್ನು ಕಣ್ಣುತುಂಬಿಕೊಳ್ಳುತ್ತಾರೆ

ಉಡುಪಿ
ಕರಾವಳಿ ತಿನಿಸುಗಳಿಗೆ ಹೆಸರುವಾಸಿಯಾದ ಕರಾವಳಿ ನಗರ ಉಡುಪಿಯು ಒಂದು ಅದ್ಭುತ ಕೌಟುಂಬಿಕ ಪ್ರವಾಸಿ ತಾಣವಾಗಿದೆ. ಚಿನ್ನದ ಮರಳಿನ ಕಡಲತೀರಗಳಲ್ಲಿ ಅಡ್ಡಾಡಿ, ಅಥವಾ ಸುಂದರವಾದ ಸೇಂಟ್ ಮೇರಿಸ್ ದ್ವೀಪಕ್ಕೆ ದೋಣಿಯಲ್ಲಿ ಹೋಗಿ, ಕರಾವಳಿಯ ತಿನಿಸುಗಳನ್ನು ಆನಂದಿಸಿ ಮತ್ತು ಸುತ್ತುಹಾಕಿ ಅಥವಾ ಕಡಲತೀರದ ಉದ್ದಕ್ಕೂ ಇರುವ ತಾಳೆ ಮತ್ತು ತೆಂಗಿನ ತೋಪುಗಳನ್ನು ಆನಂದಿಸಿ. ಈ ಸ್ಥಳವು ನಿಮ್ಮನ್ನು ಖಂಡಿತವಾಗಿ ಮಂತ್ರಮುಗ್ಧಗೊಳಿಸುತ್ತದೆ.
ನಂದಿ ಬೆಟ್ಟ
ರಾಜ್ಯ ರಾಜಧಾನಿಗೆ ಹತ್ತಿರದ ಪ್ರವಾಸಿ ತಾಣವಾದ ನಂದಿ ಬೆಟ್ಟವು ನಿಮ್ಮ ಚಿಕ್ಕ ವಿರಾಮಕ್ಕೆ ಸೂಕ್ತವಾದ ಸ್ಥಳ. ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಸಾಕ್ಷಿಯಾಗಲು ನಂದಿ ಬೆಟ್ಟಗಳ ತಪ್ಪಲಿನಲ್ಲಿ ಗಾಡಿ ಓಡಿಸಿ ಮತ್ತು ಬೆಟ್ಟದ ತುದಿಗೆ ಚಾರಣ ಮಾಡಿ. ನೆಮ್ಮದಿಯ ಸರೋವರಗಳು, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಮೋಡಿಮಾಡುವ ಭೂದೃಶ್ಯವು ಅದನ್ನು ಸಂತೋಷಕರ ತಾಣವನ್ನಾಗಿ ಮಾಡುತ್ತದೆ.
ಬೇಗ, ಕುಟುಂಬವನ್ನು ಒಟ್ಟುಗೂಡಿಸಿ ಮತ್ತು ಕರ್ನಾಟಕವು ನಿಮಗಾಗಿ ಕೂಡಿಟ್ಟಿರುವ ಅದ್ಭುತಗಳನ್ನು ಅನ್ವೇಷಿಸಲು ಹೊರಡಿ. ಅದರ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ನೈಸರ್ಗಿಕ ಮತ್ತು ಐತಿಹಾಸಿಕ ಪರಂಪರೆ ಮತ್ತು ರಾಜ್ಯದ ರುಚಿಕರವಾದ ಭಕ್ಷ್ಯಗಳನ್ನು ಸವಿಯಿರಿ.